ವಿಜಯ ಸಂಕಲ್ಪ ಯಾತ್ರೆ, ಪ್ರಗತಿ ರಥ ಯಾತ್ರೆ ಹಾಗೂ ಮೋರ್ಚಾಗಳ ಜಿಲ್ಲಾ ಸಮಾವೇಶಕ್ಕೆ ಜಿಲ್ಲಾ ಬಿಜೆಪಿ ಸಜ್ಜಾಗಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಜಿಲ್ಲಾ ಮಟ್ಟದ ಯುವ ಸಮಾವೇಶ ಫೆ.27ರಂದು ಕಾರ್ಕಳದಿಂದ 12,000ಕ್ಕೂ ಮಿಕ್ಕಿ ಬೈಕ್ಗಳ ಜಾಥಾ ಮೂಲಕ ಚಾಲನೆಗೊಂಡು ಅಜೆಕಾರಿನಲ್ಲಿ ಯಶಸ್ವಿಯಾಗಿ ನಡೆದಿದೆ.
ಮಾ.12ರಂದು ಕುಂದಾಪುರದ ನೆಹರೂ ಮೈದಾನದಲ್ಲಿ ಜಿಲ್ಲಾ ಮಹಿಳಾ ಸಮಾವೇಶ ವನ್ನು ಬೆಳಿಗ್ಗೆ 10.00 ಗಂಟೆಗೆ ಅದ್ದೂರಿಯಾಗಿ ನಡೆಸಲು ಸಿದ್ಧತೆಗಳನ್ನು ನಡೆಸಲಾಗುತ್ತಿದೆ.
ಮಾ.14ರಂದು ಬೈಂದೂರಿನಲ್ಲಿ ಜಿಲ್ಲಾ ಎಸ್ಸಿ ಎಸ್ಟಿ ಸಮಾವೇಶ,
ಮಾ.15ರಂದು ಬೆಳಿಗ್ಗೆ 10.00 ಗಂಟೆಗೆ ಬ್ರಹ್ಮಾವರದಲ್ಲಿ ಜಿಲ್ಲಾ ಹಿಂದುಳಿದ ವರ್ಗಗಳ ಸಮಾವೇಶ ಹಾಗೂ
ಮಾ.19ರಂದು ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಜಿಲ್ಲಾ ರೈತ ಸಮಾವೇಶ ನಡೆಯಲಿದೆ ಎಂದು ಅವರು ತಿಳಿಸಿದರು.
ಬಿಜೆಪಿ ‘ವಿಜಯ ಸಂಕಲ್ಪ ಯಾತ್ರೆ’ *ಮಾ.13ರಿಂದ 15ರ ವರೆಗೆ ಉಡುಪಿ ಜಿಲ್ಲೆಯಾದ್ಯಂತ ಈ ಕೆಳಗಿನಂತೆ ನೆರವೇರಲಿದೆ:
ಮಾ.13, ಮಧ್ಯಾಹ್ನ 3.30ಕ್ಕೆ ಕಾರ್ಕಳ ವಿಧಾನಸಭಾ ಕ್ಷೇತ್ರಕ್ಕೆ ಆಗಮನ, ಹೆಬ್ರಿಯಲ್ಲಿ ರೋಡ್ ಶೋ. ಸಂಜೆ 5.30ಕ್ಕೆ ಸಾರ್ವಜನಿಕ ಸಭೆ.
ಮಾ.14, ಬೆಳಿಗ್ಗೆ 9.00ಕ್ಕೆ ಕಾಪು ವಿಧಾನಸಭಾ ಕ್ಷೇತ್ರದ ಪೆರ್ಡೂರು-ಪಾಡಿಗಾರದಲ್ಲಿ ಸ್ವಾಗತ, ಸುಮಾರು 2,000 ಬೈಕ್ ಗಳ ಜಾಥಾ.
ಮಾ.14, ಮಧ್ಯಾಹ್ನ 11.00ಕ್ಕೆ ಉಡುಪಿ ವಿಧಾನಸಭಾ ಕ್ಷೇತ್ರದ ಪರ್ಕಳಕ್ಕೆ ಆಗಮನ, ಸುಮಾರು 2,000 ಬೈಕ್ ಗಳ ಜಾಥಾ.
ಮಾ.14 ರ ಸಂಜೆ ಕುಂದಾಪುರ ವಿಧಾನಸಭಾ ಕ್ಷೇತ್ರದ ಬಾರ್ಕೂರು ಬಳಿ ಸ್ವಾಗತ, ಸಂಜೆ 5.30ಕ್ಕೆ ಸಾರ್ವಜನಿಕ ಸಭೆ.
ಮಾ.15 ರ ಬೆಳಿಗ್ಗೆ 9.00ಕ್ಕೆ ಬೈಂದೂರು ವಿಧಾನಸಭಾ ಕ್ಷೇತ್ರಕ್ಕೆ ಆಗಮನ, ಸಿದ್ದಾಪುರದಲ್ಲಿ ಸಾರ್ವಜನಿಕ ಸಭೆ, ಪತ್ರಿಕಾ ಗೋಷ್ಠಿ. ಬಳಿಕ ಶೃಂಗೇರಿಗೆ ತೆರಳಲಿದೆ ಎಂದು ಅವರು ತಿಳಿಸಿದರು.
‘ಪ್ರಗತಿ ರಥ’ ಯಾತ್ರೆಯನ್ನು ಕರ್ನಾಟಕ ರಾಜ್ಯ ಬಿಜೆಪಿ ವತಿಯಿಂದ ವಿವಿಧ ಕಾರ್ಯಕ್ರಮಗಳ ಪ್ರಚಾರಕ್ಕಾಗಿ ಆಯೋಜಿಸಲಾಗಿದೆ.
ಪ್ರಮುಖವಾಗಿ ಎಲ್.ಇ.ಡಿ ವಾಹನಗಳ ಮುಖಾಂತರ ಪ್ರಚಾರ ಮಾಡುವ ‘ಪ್ರಗತಿ ರಥ’ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನರ ಪ್ರಗತಿಗಾಗಿ ಮಾಡಿರುವ ಕಾರ್ಯಕ್ರಮಗಳು ಮತ್ತು ಯೋಜನೆಗಳನ್ನು ಜನಸಾಮಾನ್ಯರಿಗೆ ತಿಳಿಸಲಿದೆ.
- ರಾಜ್ಯದಾದ್ಯಂತ 135 ಎಲ್.ಇ.ಡಿ ಪರದೆಯುಳ್ಳ ‘ಪ್ರಗತಿ ರಥ’ಗಳು ಸಂಚರಿಸಲಿವೆ.
- ಎಲ್ಲಾ 224 ಕ್ಷೇತ್ರಗಳ 58,000ಕ್ಕೂ ಹೆಚ್ಚಿನ ಬೂತ್ಗಳಲ್ಲಿ ಬಿಜೆಪಿ ಸರ್ಕಾರದ ಸಾಧನೆಗಳನ್ನು ವೀಡಿಯೊ ಪರದೆಗಳಲ್ಲಿ ಪ್ರದರ್ಶಿಸಲಾಗುವುದು.
- ಈ ರಥದಲ್ಲಿ ಎಲ್.ಇ.ಡಿ ಪರದೆ, ಮೈಕ್ ಸ್ಪೀಕರ್, ಇಂಟರ್ ನೆಟ್, ಲೈವ್ ಸ್ಟ್ರೀಮಿಂಗ್ (ಐive Sಣಡಿeಚಿmiಟಿg), ಉPS ಣಡಿಚಿಛಿಞiಟಿg ವ್ಯವಸ್ಥೆಗೊಳಿಸಲಾಗಿದೆ.
- ವಾಹನದಲ್ಲಿ ಮೈಕ್ ಮತ್ತು ಸ್ಪೀಕರ್ಗಳ ವ್ಯವಸ್ಥೆ ಇರುವುದರಿಂದ ಪ್ರತಿ ಬೂತ್ನಲ್ಲಿ ವೀಡಿಯೋ ವೀಕ್ಷಿಸುವ ಜನರನ್ನು ಉದ್ದೇಶಿಸಿ ಮಾತನಾಡುವ ಕಾರ್ಯಕ್ರಮಗಳನ್ನು ಜನತೆಗೆ ತಿಳಿಸಲಾಗುತ್ತದೆ. ಮೂಲಕ ಬಿಜೆಪಿ ಸರ್ಕಾರಗಳ ಸಮಾಜ ಕಲ್ಯಾಣ
- ರಥವು ಬಿಜೆಪಿ ಬ್ರಾಂಡಿಂಗ್ನಿಂದ ಶೃಂಗಾರಗೊಂಡಿರುತ್ತದೆ. ಸರ್ಕಾರದ ಸಾಧನೆಗಳನ್ನು ಅದರಲ್ಲಿ ಅಳವಡಿಸಲಾಗುತ್ತದೆ. ರಥದ ಸಂಚಾರವೇ ಒಂದು ಸಂಚಲನ ಉಂಟು ಮಾಡುವಂತಿರುತ್ತದೆ.
- ‘ಪ್ರಗತಿ ರಥವು’ 2 ಲಕ್ಷ ಕಿ.ಮೀ ಗಳಿಗೂ ಹೆಚ್ಚು ದೂರವನ್ನು ಕ್ರಮಿಸುತ್ತದೆ. 135 ರಥಗಳು, 224 ವಿಧಾನಸಭಾ ಕ್ಷೇತ್ರಗಳು, 58,000 ಬೂತ್ಗಳಲ್ಲಿ ಸಂಚಾರ.
ಚುನಾವಣಾ ಪ್ರಣಾಳಿಕೆಗೆ ಸಲಹೆ:
ವಿಧಾನಸಭಾ ಚುನಾವಣಾ ಪ್ರಣಾಳಿಕೆಗೆ ಸಾರ್ವಜನಿಕರಿಂದ ಸಲಹೆ ಪಡೆಯುವ ಅಭಿಯಾನವೂ ಜಿಲ್ಲೆಯಾದ್ಯಂತ ನಡೆಯಲಿದ್ದು, ಪ್ರತೀ ಮಂಡಲ ಮಟ್ಟದಲ್ಲಿ ಈ ಬಗ್ಗೆ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಕುಯಿಲಾಡಿ ತಿಳಿಸಿದರು.
- ಪ್ರಗತಿ ರಥದಲ್ಲಿಯೂ ಸಲಹಾ ಪೆಟ್ಟಿಗೆಯನ್ನು ಅಳವಡಿಸಲಾಗುತ್ತದೆ. ಪ್ರತೀ ಬೂತ್ನಿಂದಲೂ ಸಲಹೆಗಳನ್ನು ಸ್ವೀಕರಿಸಲಾಗುತ್ತದೆ. ಸಲಹಾ ಪತ್ರದಲ್ಲಿ ಬರೆದು ಸಲಹಾ ಪೆಟ್ಟಿಗೆಯಲ್ಲಿ ಹಾಕಬಹುದು.
- ಕಿಖ ಅoಜe ರಥದಲ್ಲಿ ಅಳವಡಿಸಲಾಗುತ್ತದೆ. ಅದನ್ನು ತಮ್ಮ ಮೊಬೈಲ್ನಲ್ಲಿ Sಛಿಚಿಟಿ ಮಾಡಿಕೊಂಡು ಅದರ ಮೂಲಕವೂ ಸಲಹೆಗಳನ್ನು ನೀಡುವ ವ್ಯವಸ್ಥೆಗೊಳಿಸಲಾಗಿದೆ.
- ಈ ರೀತಿಯಲ್ಲಿ ಪ್ರತೀ ವಿಧಾನಸಭಾ ಕ್ಷೇತ್ರದಿಂದ ಸುಮಾರು 10,000 ಸಲಹೆಗಳನ್ನು ಪಡೆಯುವ ಗುರಿ ಹೊಂದಿದ್ದೇವೆ. ಇದರಿಂದಾಗಿ ಇಡೀ ರಾಜ್ಯದಲ್ಲಿ 22,40,000 ಸಲಹೆ ಪಡೆಯಲು ಯೋಜನೆ ಸಿದ್ಧವಾಗಿದೆ.
- ಎಲ್ಲಾ ವ್ಯವಸ್ಥೆಗಳು ಒಳಗೊಂಡ ಈ ಪ್ರಗತಿ ರಥವು ಫೆ.27ರಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಿಂದ ಚಾಲನೆಗೊಂಡು ಉಡುಪಿ ಜಿಲ್ಲೆಯಾದ್ಯಂತ ಪ್ರತೀ ವಿಧಾನಸಭಾ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ಕಾರ್ಯ ಪ್ರಾರಂಭಿಸಿದೆ ಎಂದರು.
ವಿಶೇಷವಾಗಿ ಪ್ರಗತಿ ರಥದಲ್ಲಿ ಪ್ರದರ್ಶನಗೊಳ್ಳುವ ವೀಡಿಯೋದಲ್ಲಿ ಸರ್ಕಾರದ ಈ ಕೆಳಗಿನ ಸಾಧನೆಗಳನ್ನು ತಿಳಿಸುವ ಪ್ರಯತ್ನ ಮಾಡಲಾಗುತ್ತದೆ:
- ಜಲ ಜೀವನ್ ಮಿಷನ್ ನೀರಿನ ಸೌಲಭ್ಯ ಒದಗಿಸಿದೆ. ಯೋಜನೆಯು ರಾಜ್ಯದ 36,83,129 ಮನೆಗಳಿಗೆ ನೇರವಾಗಿ ಕುಡಿಯುವ
- ಸೌಭಾಗ್ಯ ಯೋಜನೆಯಡಿ ರಾಜ್ಯದ 1.2 ಲಕ್ಷ ಮನೆಗಳಿಗೆ ಶಾಶ್ವತ ವಿದ್ಯುತ್ ವ್ಯವಸ್ಥೆಯನ್ನು ನೀಡಿದೆ.
- ಡಬಲ್ ಇಂಜಿನ್ ಸರ್ಕಾರದಿಂದ ಮಧ್ಯ ಕರ್ನಾಟಕ ರೈತರ ನೀರಿನ ಬವಣೆ ನೀಗಿಸಲು ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಪರಿಗಣಿಸಿ ಈ ವರ್ಷದ ಬಜೆಟ್ನಲ್ಲಿ 5,300 ಕೋಟಿ ರೂಪಾಯಿ ಹಂಚಿಕೆ ಮಾಡಿದೆ. ಕಾಂಗ್ರೇಸ್ ಸರ್ಕಾರದ ವಿಳಂಬ ಧೋರಣೆಯಿಂದ ನೆನೆಗುದಿಗೆ ಬಿದ್ದದ್ದ ಈ ಯೋಜನೆ ಇನ್ನು ಕೆಲವೇ ದಿಗನಳಲ್ಲಿ ಸಾಕಾರಗೊಳ್ಳಲಿದೆ.
- ಉತ್ತರ ಕನಾಟಕ ಜನರ ಬಹುದಿನಗಳ ಬೇಡಿಕೆ ಕಳಸಾ-ಬಂಡೂರಿ ನೀರಾವರಿ ಯೋಜನೆಗೆ 2023ರ ಬಜೆಟ್ನಲ್ಲಿ 1 ಸಾವಿರ ಕೋಟಿ ರೂಪಾಯಿ ಹಂಚಿಕೆ ಮಾಡಿ ಯೋಜನೆಯ ಶೀಘ್ರ ಅನುಷ್ಠಾನಕ್ಕೆ ಕ್ರಮ ವಹಿಸಲಾಗುವುದು.
- ರಾಜ್ಯದ 4,000 ಕೆರೆಗಳು ಪುನಶ್ಚೇತನ.
- ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮುತುವರ್ಜಿಯಿಂದ 199 ಕಿ.ಮೀ ಉದ್ದದ ರೈಲ್ವೆ ಲೈನ್ ಕಾಮಗಾರಿ ವೇಗ ದುಪ್ಪಟ್ಟಾಗಿದೆ. ಹಾಗೂ ಬೆಳಗಾವಿ-ಕಿತ್ತೂರು- ಧಾರವಾಡ ರೈಲ್ವೇ ಕಾಮಗಾರಿ ಶೀಘ್ರದಲ್ಲಿ ಪೂರ್ಣಗೊಳ್ಳುತ್ತದೆ.
- ಬೆಂಗಳೂರು-ಮೈಸೂರು ‘ವಂದೇ ಭಾರತ್’ ರೈಲಿನಿಂದ ಪ್ರಯಾಣದ ಸಮಯ ತಗ್ಗಿದೆ. ರೈಲಿನ ವೇಗ ಹೆಚ್ಚಿದೆ.
- ಬೆಂಗಳೂರು ಉಪನಗರ ರೈಲ್ವೆ ಯೋಜನೆ 40 ವರ್ಷಗಳ ಕಾಂಗ್ರೇಸ್ ಪಕ್ಷದ ನಿರ್ಲಕ್ಷ್ಯವನ್ನು ಕೊನೆಗೊಳಿಸಿ ಪ್ರಧಾನ ಮಂತ್ರಿಗಳು 15,767 ಕೋಟಿ ರೂಪಾಯಿ ವೆಚ್ಚದಲ್ಲಿ ಯೋಜನೆ ಕೈಗೊಂಡಿದ್ದಾರೆ. 40 ತಿಂಗಳಲ್ಲೇ ಯೋಜನೆ ಪೂರ್ಣಗೊಳ್ಳಲಿದೆ.
- ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರವು ಈ ಸಾಲಿನ ಬಜೆಟ್ನಲ್ಲಿ ಕರ್ನಾಟಕದ ಇತಿಹಾಸದಲ್ಲಿಯೇ ಅತಿ ಹೆಚ್ಚು ಅಂದರೆ 7,561 ಕೋಟಿ ರೂಪಾಯಿಗಳನ್ನು ರಾಜ್ಯದ ರೈಲ್ವೆ ಯೋಜನೆಗಳಿಗೆ ಹಂಚಿಕೆ ಮಾಡಿದೆ. ಇದು ಯು.ಪಿ.ಎ ಸರ್ಕಾರ ನೀಡಿದ ಮೊತ್ತಕ್ಕಿಂತ 9 ಪಟ್ಟು ಹೆಚ್ಚು. ಪ್ರಸ್ತುತ ರಾಜ್ಯದಲ್ಲಿ 9 ಹೊಸ ರೈಲ್ವೆ ಮಾರ್ಗಗಳ ನಿರ್ಮಾಣ ಕಾರ್ಯವನ್ನು ಪರಿಣಾಮಕಾರಿಯಾಗಿ ಕೈಗೊಳ್ಳಲಾಗಿದೆ.
- ಬಿಜೆಪಿ ಸರ್ಕಾರದ ನವ ಕರ್ನಾಟಕ ನಿರ್ಮಾಣದ ಗುರಿಗೆ ಕೊಪ್ಪಳದ ಟಾಯ್ ಕ್ಲಸ್ಟರ್ ಸಾಕ್ಷಿ. ಇದರಿಂದಾಗಿ 25,000 ನೇರ ಉದ್ಯೋಗ ಹಾಗೂ 1,00,000 ಪರೋಕ್ಷ ಉದ್ಯೋಗ ಸೃಷ್ಠಿಯಾಗಲಿದೆ.
- ಡಬಲ್ ಇಂಜಿನ್ ಸರ್ಕಾರವು ಕಳೆದ 8 ವರ್ಷಗಳಲ್ಲಿ ರಾಜ್ಯದಲ್ಲಿ ಒಟ್ಟು 1.16 ಲಕ್ಷ ಕೋಟಿ ರೂಪಾಯಿ ವೆಚ್ಚದಲ್ಲಿ 4,000 ಕಿ.ಮೀ. ಗೂ ಹೆಚ್ಚು ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸಿದೆ. ಮುಂದಿನ ತಿಂಗಳು ಲೋಕಾರ್ಪಣೆಗೊಳ್ಳಲು ಸಿದ್ದಗೊಂಡಿರುವ ಬೆಂಗಳೂರು-ಮೈಸೂರು ಎಕ್ಸಪ್ರೆಸ್ ಹೆದ್ದಾರಿ ಕಾಮಗಾರಿಯ ವೇಗಕ್ಕೆ ಉದಾಹರಣೆ.
- ಪ್ರಧಾನಿಯವರಿಂದ ಉದ್ಘಾಟನೆಗೊಂಡಿರುವ ಶಿವಮೊಗ್ಗ ವಿಮಾನ ನಿಲ್ದಾಣ ಸೇರಿದಂತೆ ಒಟ್ಟು 8 ವಿಮಾನ ನಿಲ್ದಾಣ ನಿರ್ಮಿಸಲಾಗಿದೆ. ಹೀಗಾಗಿ ಕರ್ನಾಟಕವು ಅತ್ಯುತ್ತಮ ಸಂಪರ್ಕ ಹೊಂದಿರುವ ರಾಜ್ಯ ಎನ್ನುವ ಹೆಗ್ಗಳಿಕೆ ಗಳಿಸಿದೆ.
- ಉತ್ತರ ಕನ್ನಡ ಜಿಲ್ಲೆಯ ಜನರ ಬಹು ವರ್ಷಗಳ ಬೇಡಿಕೆಯಾದ ‘ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ’ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ.
- ಬಿಜೆಪಿ ಸರ್ಕಾರವು ನಮ್ಮ ಮೆಟ್ರೋ 2ನೇ ಹಂತದ ಕಾಮಗಾರಿಯನ್ನು ನಿಗದಿತ ಸಮಯಕ್ಕೆ ಪೂರೈಸಿದೆ.
ರೂ.16,328 ಕೋಟಿ ಮೊತ್ತದ 3ನೇ ಹಂತದ ಕಾಮಗಾರಿಗೆ ಅನುಮೋದನೆ ನೀಡಲಾಗಿದೆ.
- ರಾಜ್ಯದಲ್ಲಿರುವ ಲಂಬಾಣಿ ತಾಂಡಾಗಳಿಗೆ ಮತ್ತು ಕುರುಬರ ಹಟ್ಟಿಗಳಿಗೆ ಬಿಜೆಪಿ ಸರ್ಕಾರವು ಕಂದಾಯ ಹಳ್ಳಿಯ ಸ್ಥಾನಮಾನ ನೀಡಿದೆ. ಇದರಿಂದ ಈ ಹಳ್ಳಿಯಲ್ಲಿ ವಾಸಿಸುವ ಜನತೆಗೆ ಸರ್ಕಾರದ ಎಲ್ಲಾ ಪ್ರಯೋಜನಗಳನ್ನು ಪಡೆಯಲು ಅನುಕೂಲವಾಗಿದೆ. ಹಕ್ಕು ಪತ್ರಗಳನ್ನು ವಿತರಿಸಿರುವುದು ವಿಶ್ವದಾಖಲೆಯಾಗಿದೆ.
ಇನ್ನೂ ಹತ್ತು ಹಲವು ಯೋಜನೆಗಳಿಂದ ಸರ್ಕಾರವು ನಾಡಿನ ಕೋಟ್ಯಾಂತರ ಜನರಿಗೆ ಯೋಜನೆಗಳನ್ನು ತಲುಪಿಸಿದೆ. ಇದೇ ಹಾದಿಯಲ್ಲಿ ಮುಂದುವರಿದು ನಾಡಿನ ಜನರ ಜೀವನವನ್ನು ಉತ್ತಮಗೊಳಿಸಲು ಪ್ರಮಾಣಿಕ ಪ್ರಯತ್ನ ಮಾಡಲಿದೆ.
ಎಲ್ಲಾ ವಿಷಯಗಳ ನಾಡಿನ ಜನತೆಗೆ ತಲುಪಿಸಲೆಂದೇ ‘ಪ್ರಗತಿ ರಥ’ ಯಾತ್ರೆಯನ್ನು
ಪ್ರಾರಂಭಿಸಲಾಗಿದೆ. ಇದರಿಂದ ನಾಡಿನ ಮೂಲೆ ಮೂಲೆಗೆ ಅಭಿವೃದ್ಧಿಯ ಮಾಹಿತಿ ತಲುಪಲಿದೆ.
ರಾಜ್ಯ ಹಾಗೂ ಪ್ರತಿ ಜಿಲ್ಲೆಗೆ ಸಂಚಾಲಕರು ಮತ್ತು ಇಬ್ಬರು ಸಹ ಸಂಚಾಲಕರನ್ನು ನೇಮಿಸಲಾಗಿದೆ. ವಿಧಾನಸಭಾ ಕ್ಷೇತ್ರದ ಉಸ್ತುವಾರಿಗಾಗಿ ಸಂಚಾಲಕ ಮತ್ತು ಸಹ ಸಂಚಾಲಕರನ್ನು ನೇಮಕ ಮಾಡಲಾಗಿದೆ.
ಈ ತಂಡವು ರಾಜ್ಯದಾದ್ಯಂತ ‘ಪ್ರಗತಿ ರಥ’ದ ಸುಗಮ ಯಾತ್ರೆ ಕಾರ್ಯವನ್ನು ಯಶಸ್ವಿಗೊಳಿಸಲಿದೆ ಎಂದರು.
ಮಾ.10ರಂದು ಬೆಳಿಗ್ಗೆ 10.00 ಗಂಟೆಗೆ ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಟಪಾಡಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರದ ವಿವಿಧ ಫಲಾನುಭವಿಗಳ ಜಿಲ್ಲಾ ಮಟ್ಟದ ಬೃಹತ್ ಸಮಾವೇಶವು ರಾಜ್ಯ ಸರಕಾರದ ವತಿಯಿಂದ ನಡೆಯಲಿದೆ ಎಂದು ಅವರು ತಿಳಿಸಿದರು.
ವಿಧಾನಸಭಾ ಚುನಾವಣಾ ಪೂರ್ವ ಸಿದ್ಧತೆಗಳ ಎಲ್ಲ ಕಾರ್ಯ ಚಟುವಟಿಕೆಗಳು ಉಡುಪಿ ಜಿಲ್ಲೆಯಾದ್ಯಂತ ಬಿಜೆಪಿ ಪರ ಪೂರಕ ವಾತಾವರಣವನ್ನು ಇನ್ನಷ್ಟು ಸದೃಢಗೊಳಿಸುವ ಮೂಲಕ ಜಿಲ್ಲೆಯ ಐದೂ ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷದ ದೊಡ್ಡ ಅಂತರದ ಗೆಲುವಿಗೆ ಪುಷ್ಠಿ ನೀಡಲಿದೆ ಎಂದು ಕುಯಿಲಾಡಿ ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ವಕ್ತಾರ ಕೆ.ರಾಘವೇಂದ್ರ ಕಿಣಿ, ಜಿಲ್ಲಾ ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ, ಜಿಲ್ಲಾ ಮಾಧ್ಯಮ ಸಂಚಾಲಕ ಶ್ರೀನಿಧಿ ಹೆಗ್ಡೆ ಹಿರೇಬೆಟ್ಟು, ಪ್ರಗತಿ ರಥ ಯಾತ್ರೆಯ ಜಿಲ್ಲಾ ಸಂಚಾಲಕ ಶರತ್ ಶೆಟ್ಟಿ ಉಪ್ಪುಂದ ಹಾಗೂ ಚುನಾವಣಾ ಪ್ರಣಾಳಿಕೆ ಸಲಹಾ ಸಮಿತಿಯ ಜಿಲ್ಲಾ ಸಂಚಾಲಕ ಅಂಡಾರು ದೇವಿ ಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.