ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿರುವ 2023ನೇ ಸಾಲಿನ ರಾಜ್ಯ ಬಜೆಟ್ ಎಲ್ಲಾ ವರ್ಗದ ಜನತೆ ಹಾಗೂ ಎಲ್ಲಾ ಪ್ರದೇಶಗಳನ್ನು ಗಮನದಲ್ಲಿಟ್ಟುಕೊಂಡು ನೀಡಿರುವ ದಿಟ್ಟ ನಿರ್ಧಾರದ, ಸಮತೋಲಿತ, ಅಭಿವೃದ್ಧಿ ಪರ ಬಜೆಟ್ ಆಗಿದೆ ಎಂದು ಬಿಜೆಪಿ ಜಿಲ್ಲಾ ಆರ್ಥಿಕ ಪ್ರಕೋಷ್ಠದ ಸಂಚಾಲಕ ದಿವಾಕರ ಶೆಟ್ಟಿ ಕೆ. ಹೇಳಿದರು.
ಅವರು ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಜಿಲ್ಲಾ ಕಛೇರಿಯಲ್ಲಿ ನಡೆದ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ರಾಜ್ಯ ಬಜೆಟ್ ನಲ್ಲಿ ಉಡುಪಿ ಜಿಲ್ಲೆಗೆ ನೇರವಾಗಿ ಈ ಕೆಳಗಿನಂತೆ ಹಲವಾರು ಮಹತ್ವಪೂರ್ಣ ಘೋಷಣೆಗಳು ಅನುಕೂಲಕರವಾಗಿವೆ:
* ಮೀನು ಉತ್ಪಾದಕರ ಸಂಸ್ಥೆಯನ್ನು ಸ್ಥಾಪಿಸಿ ಅದರ ಪ್ರಯೋಜನ ಮೀನುಗಾರರಿಗೆ ದೊರೆಯುವಂತೆ ಮಾಡುವುದು
* ಮೀನುಗಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ
* ಮೀನುಗಾರರ ಸೀಮೆ ಎಣ್ಣೆ ಬಳಕೆಯ ಬೋಟ್ ಗಳನ್ನು ಡೀಸೆಲ್ ಬೋಟ್ ಗಳನ್ನಾಗಿ ಪರಿವರ್ತಿಸಲು ರೂ.50,000 ಸಹಾಯಧನ ನೀಡುವುದು
* ರಾಜ್ಯದಾದ್ಯಂತ ಮೀನುಗಾರರಿಗೆ 10,000 ಮನೆಗಳ ನಿರ್ಮಾಣ
* ಉಡುಪಿ ಜಿಲ್ಲೆಗೊಂದು ಶ್ರೀ ನಾರಾಯಣ ಗುರು ವಸತಿ ಶಾಲೆ
* ಕುಂದಾಪುರದ ಕಂಬದಕೋಣೆಯಲ್ಲಿ ಸೀ ಫುಡ್ ಪಾರ್ಕ್ ಸ್ಥಾಪನೆ
* ಬೈಂದೂರಿನಲ್ಲಿ ಮರಿನಾ ಅಭಿವೃದ್ಧಿಗೆ ಕ್ರಮ
* ಜಿಲ್ಲೆಯಾದ್ಯಂತ ಕೆರೆ, ಬಾವಿ, ನಾಲೆಗಳನ್ನು ಅಭಿವೃದ್ಧಿ ಪಡಿಸುವುದು
* ಮಂಗಳೂರಿನಿಂದ ಮುಂಬೈಗೆ ನೇರ ಜಲ ಸಾರಿಗೆ ವ್ಯವಸ್ಥೆ
* ವಿವಿಧ ಸಮುದಾಯಗಳ ಸಮಗ್ರ ಅಭಿವೃದ್ಧಿಗೆ ಕ್ರಮ
ರಾಜ್ಯ ಬಜೆಟ್ 2023ರ ಪ್ರಮುಖ ಅಂಶಗಳು:
ನಮ್ಮ ದೇಶ ಅಭಿವೃದ್ಧಿಯ ಪಥದಲ್ಲಿ ದಾಪುಗಾಲು ಇಡುತ್ತಿರುವಂತೆ ಅದೇ ವೇಗದಲ್ಲಿ ಕರ್ನಾಟಕ ರಾಜ್ಯ ಕೂಡ ಅಭಿವೃದ್ಧಿಯಲ್ಲಿ ಮುನ್ನುಗ್ಗುತ್ತಿದೆ. ಅದಕ್ಕೆ ಸ್ಪಷ್ಟ ಉದಾಹರಣೆಗಳು:
1) ಜಿ.ಎಸ್.ಟಿ. ಸಂಗ್ರಹ ಕಳೆದ ವರ್ಷದ ಬಜೆಟ್ ನಿರೀಕ್ಷೆಗಿಂತ ರೂ.11,000 ಕೋಟಿ ಹೆಚ್ಚು ಸಂಗ್ರಹವಾಗಿದೆ.
2) ಅಬಕಾರಿ ಸಂಗ್ರಹದ ನಿರೀಕ್ಷೆ ರೂ.29,000 ಇದ್ದು, ಸಂಗ್ರಹ ರೂ.32,000 ಕೋಟಿ ಆಗಿದೆ.
3) ಜಿ.ಎಸ್.ಟಿ. ಸಂಗ್ರಹದಲ್ಲಿ ದೊಡ್ಡ ರಾಜ್ಯಗಳನ್ನು ಹಿಂದಿಕ್ಕಿ ಕರ್ನಾಟಕ ರಾಜ್ಯ ಸತತ 2ನೇ ಸ್ಥಾನದಲ್ಲಿದೆ.
4) ರಾಜ್ಯಕ್ಕೆ ಎಫ್.ಡಿ.ಐ ಹೆಚ್ಚು ಹರಿದು ಬರುತ್ತಿದೆ.
5) ಕಳೆದ ವರ್ಷದ ಬಜೆಟ್ನ ಆದಾಯದ ನಿರೀಕ್ಷೆ ರೂ.1.89 ಲಕ್ಷ ಕೋಟಿ ಆಗಿದ್ದು, ರೂ.2.12 ಲಕ್ಷ ಕೋಟಿ ಸಂಗ್ರಹವಾಗುವ ಮೂಲಕ 12% ಹೆಚ್ಚುವರಿ ಆದಾಯವಾಗಿದೆ.
ಇದೆಲ್ಲದರ ಅರ್ಥ ನಮ್ಮ ದೇಶದಂತೆಯೇ ನಮ್ಮ ರಾಜ್ಯವೂ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುತ್ತಿದೆ. ಜನತೆಯ ಖರೀದಿ ಸಾಮರ್ಥ್ಯ ವೃದ್ಧಿಯಾಗುತ್ತಿದೆ.
ಈ ಅಭಿವೃದ್ಧಿ ವೇಗಕ್ಕೆ ಪೂರಕವಾಗಿ ಎಲ್ಲಿಯೂ ಕೊರತೆ ಆಗದ ರೀತಿ ಅತ್ಮವಿಶ್ವಾಸದಿಂದ ಈ ಬಜೆಟ್ ಮಂಡಿಸಲಾಗಿದೆ.
ಈ ಕೆಳಗಿನ ಹೊಸ ಭರವಸೆಗಳನ್ನು ಈ ಬಜೆಟ್ ಹೊಂದಿದೆ:
1) ಬಜೆಟ್ ಗಾತ್ರ ರೂ.3,09,182 ಕೋಟಿ ಅಂದರೆ ಕಳೆದ ವರ್ಷಕ್ಕಿಂತ 16.03% ಹೆಚ್ಚು.
2) ಈ ಬಾರಿ ಆದಾಯ ವಿತ್ತೀಯ ಕೊರತೆ ಇಲ್ಲದೆ ರೂ.402 ಕೋಟಿ ರೂಪಾಯಿಗಳ ಆದಾಯ ವಿತ್ತೀಯ ಮಿಗತೆ ಬಜೆಟ್ ಮಂಡಿಸಲಾಗಿದೆ. ಇದು ಕೋವಿಡ್ ನಂತರದ ಬಜೆಟ್ಗಳಲ್ಲಿ ಪ್ರಥಮವಾಗಿದೆ.
3) ಕೇಂದ್ರ ಸರಕಾರದ ಬಜೆಟ್ನಂತೆ ರಾಜ್ಯದಲ್ಲಿಯೂ 20% ಹಣವನ್ನು ಅಂದರೆ ರೂ.58,327 ಕೋಟಿಯನ್ನು ಬಂಡವಾಳ ವೆಚ್ಚಕ್ಕಾಗಿ ಉಪಯೋಗಿಸಲಾಗಿದೆ.
4) ನಮ್ಮ ಜಿ.ಎಸ್.ಡಿ.ಪಿ. ರೂ.23.34 ಲಕ್ಷ ಕೋಟಿ ಆಗಿದ್ದು, 7% ದಲ್ಲಿ ಅಭಿವೃದ್ಧಿಯಾಗಲಿದೆ.
5. ವಿತ್ತೀಯ ಕೊರತೆಯನ್ನು ಜಿ.ಎಸ್.ಡಿ.ಪಿ. ಯ 2.6% ಇರಿಸಲಾಗಿದೆ. ವಿತ್ತೀಯ ಕೊರತೆ 3% ಕ್ಕಿಂತ ಕಡಿಮೆ ಇದ್ದರೆ ಉತ್ತಮ.
6) ಇದು ಒಂದು ಸಮತೋಲನ ಕಾಯ್ದುಕೊಂಡಿರುವ ಬಜೆಟ್ ಆಗಿದೆ. ಬೆಂಗಳೂರು ನಗರದ ಅಭಿವೃದ್ಧಿಗೆ ಎಷ್ಟು ಪ್ರಾಮುಖ್ಯತೆ ಕೊಡಲಾಗಿದೆಯೋ ಅಷ್ಟೇ ಪ್ರಾಮುಖ್ಯತೆಯನ್ನು ಹಳ್ಳಿಗಳಿಗೂ ಕೊಡಲಾಗಿದೆ.
ಆರ್ಥಿಕ ಸಮತೋಲನ, ಪ್ರಾದೇಶಿಕ ಸಮತೋಲನ, ಸಾಮಾಜಿಕ ಸಮತೋಲನ ಕಾಪಾಡುವ ಉದ್ದೇಶದಿಂದ ಬಜೆಟ್ ಹೂಡಿಕೆಗಳನ್ನು ಈ ಕೆಳಗಿನ 6 ವಲಯಗಳನ್ನಾಗಿ ವಿಂಗಡಿಸಿ ವಿತರಿಸುವ ಪ್ರಯತ್ನ ಮಾಡಲಾಗಿದೆ:
1) ಕೃಷಿ ಮತ್ತು ಪೂರಕ ಚಟುವಟಿಕೆ : ರೂ.39,031 ಕೋಟಿ
2) ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿ : ರೂ.80,318 ಕೋಟಿ
3) ಆರ್ಥಿಕ ಅಭಿವೃದ್ಧಿಗೆ ಉತ್ತೇಜನ : ರೂ.61,498 ಕೋಟಿ
4) ಬೆಂಗಳೂರು ಸಮಗ್ರ ಅಭಿವೃದ್ಧಿ : ರೂ.9,698 ಕೋಟಿ
5) ಸಂಸ್ಕೃತಿ, ಪರಂಪರೆ ಮತ್ತು ನೈಸರ್ಗಿಕ ಸಂರಕ್ಷಣೆ : ರೂ.3,458 ಕೋಟಿ
6) ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಸೇವೆ : ರೂ.68,585 ಕೋಟಿ.
1. ಕೃಷಿ ಮತ್ತು ಪೂರಕ ಚಟುವಟಿಕೆ :
* ಕೃಷಿಗೆ ಬಡ್ಡಿ ರಹಿತ ಸಾಲ ರೂ.5 ಲಕ್ಷಕ್ಕೆ ಏರಿಕೆಯಿಂದ 30 ಲಕ್ಷ ರೈತರಿಗೆ ಲಾಭ
* ಸಿರಿ ದಾನ್ಯಕ್ಕೆ ರೂ.10 ಸಾವಿರ ಸಬ್ಸಿಡಿ.
* ಬಡ್ಡಿ ಸಬ್ಸಿಡಿಗೆ ಸಾಲ ಮಿತಿ ರೂ.10 ಲಕ್ಷಕ್ಕೆ ಏರಿಕೆ.
* ತಿಪಟೂರಿನಲ್ಲಿ ತೋಟಗಾರಿಕಾ ವಿಶ್ವವಿದ್ಯಾನಿಲಯ ಸ್ಥಾಪನೆ
* ಜಲ ಹೊಂಡ ವಿಸ್ತರಿಸುವ ಜಲನಿಧಿ ಯೋಜನೆ
* ಶಿಡ್ಲ ಘಟ್ಟದಲ್ಲಿ ಹೈಟೆಕ್ ರೇಷ್ಮೆ ಗೂಡು ಮಾರುಕಟ್ಟೆ
* ಬಳ್ಳಾರಿ ಜಿಲ್ಲೆಯಲ್ಲಿ ಮೆಗಾ ಡೈರಿ ಸ್ಥಾಪನೆ
* ಕರಾವಳಿಯ ಸೀಮೆಎಣ್ಣೆ ಬೋಟ್ಗಳನ್ನು ಡಿಸೀಲ್ಗೆ ಪರಿವರ್ತನೆ, ರೂ.50,000 ಸಬ್ಸಿಡಿ
* ಡಿಸೀಲ್ ಸಬ್ಸಿಡಿ ರೂ.4 ಲಕ್ಷ ಖರೀದಿ ತನಕ ವಿಸ್ತರಣೆ
* 10,000 ಮೀನುಗಾರರಿಗೆ ವಸತಿ
* ಚಿಕ್ಕಬಳ್ಳಾಪುರದಲ್ಲಿ ಹೈಟೆಕ್ ಮೀನು ಮಾರುಕಟ್ಟೆ
* ಕೃಷ್ಣಾ ಮೇಲ್ದಂಡೆ ಯೋಜನೆಗೆ ರೂ.5,000 ಕೋಟಿ
* ಕಳಸ ಬಂಡೂರಿ ಯೋಜನೆಗೆ ರೂ.1,000 ಕೋಟಿ
* ಭದ್ರಾ ಮೇಲ್ದಂಡೆ ಯೋಜನೆಗೆ ರೂ.5,300 ಕೋಟಿ
2. ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿ:
* ಸರ್ಕಾರಿ ಪದವಿ ಪೂರ್ವ ಮತ್ತು ಪದವಿ ವಿದ್ಯಾರ್ಥಿಗಳಿಗೆ ಸಂಪೂರ್ಣ ಶುಲ್ಕ ವಿನಾಯಿತಿ
* 9,556 ಹೊಸ ಶಾಲಾ ಕೊಠಡಿ ನಿರ್ಮಾಣ
* ಶಾಲೆಗಳಲ್ಲಿ 5,581 ಶೌಚಾಲಯ ನಿರ್ಮಾಣ
* ಹಳ್ಳಿ ಮುತ್ತು ಯೋಜನೆ – ಸಿ.ಇ.ಟಿ. ಪಾಸಾಗಿ ಬರುವ 5 ಲಕ್ಷ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಸಂಪೂರ್ಣ ಶುಲ್ಕ ವಿನಾಯಿತಿ
* 7 ಇಂಜಿನಿಯರಿಂಗ್ ಕಾಲೇಜುಗಳನ್ನು ಕೆ.ಐ.ಟಿ. ಗಳಾಗಿ ಪರಿವರ್ತನೆ
* 2 ಬಾರಿ ಆರೋಗ್ಯ ತಪಾಸಣೆಯ ಮನೆ ಮನೆಗೆ ಆರೋಗ್ಯ ಯೋಜನೆ
* 7 ತಾಲೂಕು ಕೇಂದ್ರಗಳಲ್ಲಿ 100 ಹಾಸಿಗೆಯ ಆಸ್ಪತ್ರೆಗಳು
* ನಗು-ಮಗು ಯೋಜನೆ
* ಸಾವಣೂರಿನಲ್ಲಿ ತಾಯಿ ಮಕ್ಕಳ ಆಸ್ಪತ್ರೆ
* ಕುಮಟಾದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ
* ಭೂ ರಹಿತ ಕೃಷಿ ಕಾರ್ಮಿಕರಿಗೆ ರೂ.1,000 ತಿಂಗಳ ಸಹಾಯಧನ
* 1 ಲಕ್ಷ ಮಹಿಳೆಯರಿಗೆ ಕೌಶಲಾಭಿವೃದ್ಧಿ ತರಬೇತಿ.
* ದುಡಿಯುವ 30 ಲಕ್ಷ ಮಹಿಳೆಯರಿಗೆ ಉಚಿತ ಬಸ್ ಪಾಸ್
* 8 ಲಕ್ಷ ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್
* ವಿದೇಶ ವ್ಯಾಸಾಂಗ ಮಾಡುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಬಡ್ಡಿ ರಹಿತ ಸಾಲ ರೂ.20 ಲಕ್ಷ
* 5 ಲಕ್ಷ ಮನೆ ನಿರ್ಮಾಣದ ಗುರಿ
3. ಆರ್ಥಿಕ ಅಭಿವೃದ್ಧಿಗೆ ಉತ್ತೇಜನ :
* ಗ್ರಾಮ ಪಂಚಾಯತ್ಗಳಿಗೆ ಅನುದಾನ ಹೆಚ್ಚಳ : ರೂ.24 ಲಕ್ಷದಿಂದ ರೂ.60 ಲಕ್ಷ ತನಕ
* 5 ಸಾವಿರ ಕಿಲೋಮೀಟರ್ ಗ್ರಾಮೀಣ ರಸ್ತೆ ನಿರ್ಮಾಣ.
* 2 ಸಾವಿರ ಕೆರೆಗಳ ಅಭಿವೃದ್ಧಿ
* 330 ಗ್ರಾಮಗಳಲ್ಲಿ ಗ್ರಂಥಾಲಯ
* 1,700 ಕಿಲೋಮೀಟರ್ ರಾಜ್ಯ ಹೆದ್ದಾರಿ ನಿರ್ಮಾಣ
* ದಾವಣಗೆರೆ, ಕೊಪ್ಪಳದಲ್ಲಿ ವಿಮಾನ ನಿಲ್ದಾಣ
* ಹಳೆ ಮಂಗಳೂರು ಬಂದರಿನಲ್ಲಿ ಶಿಪ್ಯಾರ್ಡ್
* ಬೈಂದೂರಿನಲ್ಲಿ ಮರಿನಾ ಅಭಿವೃದ್ಧಿ
* ಜಿಲ್ಲೆಯ ಗುರುಪುರ ಮತ್ತು ನೇತ್ರಾವತಿ ನದಿ ಸೇರಿ ಇತರೆಡೆ ಬಾರ್ಜ್ಗಳ ಸೇವೆ
4. ಬೆಂಗಳೂರು ಸಮಗ್ರ ಅಭಿವೃದ್ಧಿ :
* ಸಂಚಾರ ದಟ್ಟಣೆ ನಿವಾರಣೆಗೆ 75 ಜಂಕ್ಷನ್ಗಳ ನಿರ್ಮಾಣ
* ಹೆಚ್ಚುವರಿ 40.15 ಕಿ.ಮೀ ಮೆಟ್ರೋ ಸೇವೆ.
* ಮಹಿಳೆಯರಿಗಾಗಿ 250 ‘She Toilet’ ನಿರ್ಮಾಣ
5. ಸಂಸ್ಕೃತಿ, ಪರಂಪರೆ ಮತ್ತು ನೈಸರ್ಗಿಕ ಸಂರಕ್ಷಣೆ :
* ಬೆಂಗಳೂರಿನಲ್ಲಿ ಶ್ರೀ ಭುವನೇಶ್ವರಿ ತಾಯಿಯ ಮೂರ್ತಿ ಪ್ರತಿಷ್ಠಾಪನೆ
* ಪ್ರತೀ ಗ್ರಾಮ ಪಂಚಾಯತ್ಗಳಲ್ಲಿ ರೂ.5 ಕೋಟಿ ವೆಚ್ಚದಲ್ಲಿ ಕ್ರೀಡಾಂಗಣ ನಿರ್ಮಾಣ
* ಕರ್ನಾಟಕ ಒಲಂಪಿಕ್ ಕನಸಿನ ಯೋಜನೆ ನಿಧಿ ಸ್ಥಾಪನೆ
* ಅಂಜನಾದ್ರಿ ಬೆಟ್ಟ, ಚಾಮುಂಡಿ ಬೆಟ್ಟ, ಹಂಪಿ ಸ್ಮಾರಕಗಳ ಅಭಿವೃದ್ಧಿ
* ಹೊನ್ನಾವರದಲ್ಲಿ ಚೆನ್ನಭೈರವ ದೇವಿ ಸ್ಮಾರಕ ಉದ್ಯಾನ ನಿರ್ಮಾಣ
* ರಾಮನಗರದಲ್ಲಿ ಶ್ರೀ ರಾಮ ಮಂದಿರ ನಿರ್ಮಾಣ
6. ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಸೇವೆ :
* ಗ್ರಾಮ ಸಹಾಯಕರ ಹುದ್ದೆಯನ್ನು ಜನಸೇವಕ ಎಂದು ಮರುನಾಮಕರಣ
* ಧಾರ್ಮಿಕ ದೇವಸ್ಥಾನ ಮತ್ತು ಮಠಗಳ ಅಭಿವೃದ್ಧಿಗಾಗಿ ರೂ.1 ಸಾವಿರ ಕೋಟಿ ನಿಯೋಜನೆ
* ಆಟೋ ಚಾಲಕರು, ಟ್ಯಾಕ್ಸಿ ಚಾಲಕರು, ಲಾರಿ ಚಾಲಕರು, ಇ-ಕಾಮರ್ಸ್ ಸೇವೆ ನೀಡುವವರಿಗೆ ರೂ.4 ಲಕ್ಷ ವಿಮಾ ಸೌಲಭ್ಯ
* ಶಾಲಾ ವಿದ್ಯಾರ್ಥಿಗಳ ಅನುಕೂಲಕ್ಕಾಗಿ 1,000 ಹೊಸ ಬಸ್ಗಳ ವ್ಯವಸ್ಥೆ
ತೆರಿಗೆ ಪ್ರಸ್ತಾವನೆ :
* ವೇತನದಾರರ ವೃತ್ತಿ ತೆರಿಗೆ ಮಿತಿ ರೂ.15,000ದಿಂದ ರೂ.25,000ಕ್ಕೆ
* ಜಿ.ಎಸ್.ಟಿ ಪೂರ್ವ ಬಾಕಿ ತೆರಿಗೆಗಳಿಗೆ ಕರಸಮಾಧಾನ ಯೋಜನೆ
ಮಾ.13ರಿಂದ 15ರ ವರೆಗೆ ಜಿಲ್ಲೆಯಲ್ಲಿ ಬಿಜೆಪಿ ‘ವಿಜಯ ಸಂಕಲ್ಪ ಯಾತ್ರೆ’ :
ಕರ್ನಾಟಕ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾರವರಿಂದ ಚಾಲನೆಗೊಂಡು ರಾಜ್ಯದಾದ್ಯಂತ ನಡೆಯಲಿರುವ ‘ವಿಜಯ ಸಂಕಲ್ಪ ಯಾತ್ರೆ’ ಮಾ.13 ರಿಂದ 15ರ ವರೆಗೆ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ರವರ ನೇತೃತ್ವದಲ್ಲಿ ಉಡುಪಿ ಜಿಲ್ಲೆಯಾದ್ಯಂತ ಈ ಕೆಳಗಿನಂತೆ ನೆರವೇರಲಿದೆ:
* ಮಾರ್ಚ್ 13, ಮಧ್ಯಾಹ್ನ 3.30ಕ್ಕೆ ಕಾರ್ಕಳ ವಿಧಾನಸಭಾ ಕ್ಷೇತ್ರಕ್ಕೆ ಆಗಮನ, ಪ್ರಮುಖ ಸ್ಥಳಗಳಲ್ಲಿ ಸ್ವಾಗತ, ರೋಡ್ ಶೋ. ಸಂಜೆ 5.30ಕ್ಕೆ ಸಾರ್ವಜನಿಕ ಸಭೆ
* ಮಾರ್ಚ್ 14, ಬೆಳಿಗ್ಗೆ 9.00ಕ್ಕೆ ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಧಾರ್ಮಿಕ ಸ್ಥಳ ಹಾಗೂ ಪ್ರಮುಖ ವ್ಯಕ್ತಿಗಳ ಬೇಟಿ, ಪತ್ರಿಕಾ ಗೋಷ್ಠಿ, ರೋಡ್ ಶೋ.
* ಮಾರ್ಚ್ 14, ಮದ್ಯಾಹ್ನ 2.30ಕ್ಕೆ ಉಡುಪಿ ವಿಧಾನಸಭಾ ಕ್ಷೇತ್ರಕ್ಕೆ ಆಗಮನ. ಪ್ರಮುಖ ಸ್ಥಳಗಳಲ್ಲಿ ಸ್ವಾಗತ ಮತ್ತು ರೋಡ್ ಶೋ.
* ಮಾರ್ಚ್ 14, ಸಂಜೆ ಕುಂದಾಪುರ ವಿಧಾನಸಭಾ ಕ್ಷೇತ್ರಕ್ಕೆ ಆಗಮನ. ಪ್ರಮುಖ ಸ್ಥಳಗಳಲ್ಲಿ ಸ್ವಾಗತ, ಸಂಜೆ 5.30ಕ್ಕೆ ಸಾರ್ವಜನಿಕ ಸಭೆ
* ಮಾರ್ಚ್ 15, ಬೆಳಿಗ್ಗೆ 9.00ಕ್ಕೆ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಧಾರ್ಮಿಕ ಸ್ಥಳ ಹಾಗೂ ಪ್ರಮುಖ ವ್ಯಕ್ತಿಗಳ ಬೇಟಿ. ಪತ್ರಿಕಾ ಗೋಷ್ಠಿ. ರೋಡ್ ಶೋ. ಬಳಿಕ ಶೃಂಗೇರಿ ವಿಧಾನಸಭಾ ಕ್ರೇತ್ರಕ್ಕೆ ತೆರಳಲಿದೆ.
‘ವಿಜಯ ಸಂಕಲ್ಪ ಯಾತ್ರೆ’ಯ ರಾಜ್ಯ ಸಹ ಸಂಚಾಲಕರಾಗಿ ಕಿಶೋರ್ ಕುಮಾರ್ ಕುಂದಾಪುರ ಹಾಗೂ ಜಿಲ್ಲಾ ಸಂಚಾಲಕರಾಗಿ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಸಹ ಸಂಚಾಲಕರಾಗಿ ಗಿರೀಶ್ ಎಮ್. ಅಂಚನ್ ಮತ್ತು ಅನಿತಾ ಶ್ರೀಧರ್ ಜವಾಬ್ದಾರಿ ನಿರ್ವಹಿಸಲಿದ್ದಾರೆ.
ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಆಯಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಕ್ಷದ ಪ್ರಮುಖರು, ಎಲ್ಲಾ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತ ಬಂಧುಗಳು ಸಕ್ರಿಯವಾಗಿ ಭಾಗವಹಿಸಿ ‘ವಿಜಯ ಸಂಕಲ್ಪ ಯಾತ್ರೆ’ಯನ್ನು ಅತ್ಯಂತ ಯಶಸ್ವಿಗೊಳಿಸಬೇಕು ಎಂದು ಬಿಜೆಪಿ ಜಿಲ್ಲಾ ವಕ್ತಾರ ಕೆ.ರಾಘವೇಂದ್ರ ಕಿಣಿ ವಿನಂತಿಸಿದರು.
ಫೆ.26 ಬೆಳಿಗ್ಗೆ 11.00ಕ್ಕೆ ಜಿಲ್ಲೆಯ ಎಲ್ಲಾ 1,111 ಬೂತ್ ಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಮನ್ ಕೀ ಬಾತ್ ವೀಕ್ಷಣೆ:
ಪ್ರಧಾನಿ ನರೇಂದ್ರ ಮೋದಿಯವರು ದೇಶದ ಪ್ರಚಲಿತ ವೈಶಿಷ್ಟ್ಯಪೂರ್ಣ ವಿದ್ಯಮಾನಗಳಿಗೆ ಬೆಳಕು ಚೆಲ್ಲುವ ವಿಚಾರಗಳೊಂದಿಗೆ ಪ್ರತೀ ತಿಂಗಳ ಕೊನೆಯ ರವಿವಾರ ಬೆಳಿಗ್ಗೆ ಗಂಟೆ 11.00ಕ್ಕೆ ನಡೆಸಿಕೊಡುವ ಮನ್ ಕೀ ಬಾತ್ ಕಾರ್ಯಕ್ರಮ ಫೆ.26ರಂದು ನಡೆಯಲಿದೆ.
ಪಕ್ಷದ ಸೂಚನೆಯಂತೆ, ಫೆ.26 ರವಿವಾರ ಬೆಳಿಗ್ಗೆ 11.00 ಗಂಟೆಗೆ ಪ್ರಸಾರವಾಗುವ ಪ್ರಧಾನಿ ಮೋದಿಯವರ ‘ಮನ್ ಕೀ ಬಾತ್’ ಕಾರ್ಯಕ್ರಮವನ್ನು ಜಿಲ್ಲೆಯ ಎಲ್ಲಾ 1,111 ಬೂತ್ ಗಳಲ್ಲಿ ಬೂತ್ ಅಧ್ಯಕ್ಷರ ಸಹಿತ ಬೂತ್ ಸಮಿತಿ ಸದಸ್ಯರು, ಪಕ್ಷದ ಪ್ರಮುಖರು, ಎಲ್ಲಾ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು, ಕಾರ್ಯಕರ್ತ ಬಂಧುಗಳು ಮತ್ತು ಪಕ್ಷದ ಹಿತೈಷಿಗಳು ವೀಕ್ಷಿಸುವ ಜೊತೆಗೆ 2 ಫೋಟೋ ಮತ್ತು ವಿವರವನ್ನು ಕಾರ್ಯಕ್ರಮ ಮುಗಿದ ತಕ್ಷಣ ಬೂತ್ ಅಧ್ಯಕ್ಷರು ನಿಗದಿತ ಲಿಂಕ್ ಮೂಲಕ ಅಪ್ಲೋಡ್ ಮಾಡುವಂತೆ ಬಿಜೆಪಿ ಜಿಲ್ಲಾ ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ ವಿನಂತಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಮಾಧ್ಯಮ ಸಂಚಾಲಕ ಶ್ರೀನಿಧಿ ಹೆಗ್ಡೆ ಹಿರೇಬೆಟ್ಟು ಮತ್ತು ಜಿಲ್ಲಾ ಸಹ ವಕ್ತಾರ ಪ್ರತಾಪ್ ಶೆಟ್ಟಿ ಚೇರ್ಕಾಡಿ ಉಪಸ್ಥಿತರಿದ್ದರು.